Saturday, February 27, 2021

ಸ್ನೇಹ

 *ಸ್ನೇಹ*


ಅಂತರಂಗದ ಭಾವನೆಗಳು ಒಡಮೂಡಿವೆ

ಸಮಾನ ಮನಸ್ಸಿನ ವ್ಯಕ್ತಿಯೆದುರು

ನೀಡುವನು ಚೈತನ್ಯವನು ಉಲ್ಲಾಸ ತುಂಬಿರಲೆಂದು

ಕೈಹಿಡಿದು ನಡೆಯುವನು ಜೀವನ ಸುಂದರವಾಗಿರಲೆಂದು



ಯಾರು ಏನೆಂದರೇನು ಎನಗೆ ಭಯವಿಲ್ಲ

ಕಾರಣ ನಮ್ಮಿಬ್ಬರ ಮನದಲ್ಲಿ ಅಳುಕಿಲ್ಲ

ಪಿಸುಗುಡುವವರು ಜನರು

ಕಿವಿಗೊಡದಿರುವೆವು

ಕಾರಣ ನಾಲಗೆಗೆ ಮೂಳೆಯಿಲ್ಲ



ಸಂಪತ್ತಿನ ಕದನ ನಮ್ಮಿಬ್ಬರಲಿಲ್ಲ

ಕಾರಣ ಕೊನೆಯಲ್ಲಿ ನಾವು ಹೊತ್ತುಕೊಂಡು ಹೋಗುವುದಿಲ್ಲ

ಬಾಳಬೇಕು ನೂರುಕಾಲ

ಮಿಡಿಯಬೇಕು ಹೃದಯ ಬಹುಕಾಲ

ನೀವಂದುಕೊಂಡಿರಬಹುದು ಇವರು ಜೋಡಿಗಳೆಂದು

ಹೌದು, ನಾವು ಕಲ್ಮಶವರಿಯದ ನಿಜವಾದ ಪ್ರಾಣ ಸ್ನೇಹಿತರು..

ಹಳ್ಳಿ ಜೀವನ

 *ಹಳ್ಳಿ ಜೀವನ*


ಬಾರೆ ಶಾಂತವ್ವ ಬಾರೆ

ಬಿತ್ತೋಕೋಗೋಣ...

ಬಾರೆ ಶಾಂತವ್ವ ಬಾರೆ 

ಬಿತ್ತೋಕೋಗೋಣ....


ಬಾರಿಕೋಲು ಹಿಡಿದು ಮಾವ ಹೊಂಟಾನ 

ಬುತ್ತಿಗಂಟು ಹಿಡಿದು ನಾನು ಹೊಂಟೀನಿ

ನೀನು ಬಂದರೆ ಬಾರೆ ದಾರಿ ದೂರೈತಿ

ಮಾತನಾಡಿ ಮಾತನಾಡಿ ದಾರಿ ಸವೆಸೋಣ


ಬಾರೆ ಶಾಂತವ್ವ ಬಾರೆ ...



ಎಳ್ಳ ಹಚ್ಚಿ ರೊಟ್ಟಿ ಬಡಿದು ನಾನು ಹೊಂಟೀನಿ

ತಿಕ್ಕಿ ತಿಕ್ಕಿ ಚಕ್ಕಡಿ ತೊಳೆದು ಮಾವ ಹೊಂಟಾನ

ನೀನು ಬಂದರೆ ಬಾರೆ ಮಾತನಾಡೋಣ ಮಾತನಾಡುತ ನಾವು ದಾರಿ ಸವೆಸೋಣ


ಗುರಳ್ಳು ಹಿಂಡಿ ಮಾಡಿಕೊಂಡು ನಾನು ಹೊಂಟೀನಿ

ಚಕ್ಕಡಿ ಕೊಳ್ಳ ಕಟ್ಟಿ ಮಾವ ಹೊಂಟಾನ

ನೀನು ಬಂದರ ಬಾರೆ ಮಾತನಾಡೋಣ ಮಾತನಾಡಿ ಅತ್ತಿಮಾವನ ಹಿತವ ಬಯಸೋಣ

 

ಬಾರೆ ಶಾಂತವ್ವ ಬಾರೆ...




✍️ *ಪ್ರವೀಣ ಪಾಟೀಲ, ಬ್ಯಾಡಗಿ* ✍️

ನರ್ತಕಿ

 *ನರ್ತಕಿ*


( *ಹೊಟ್ಟೆಪಾಡಿಗಾಗಿ ನರ್ತನ* )


ನಟರಾಜನ ಆರಾಧನೆಯಲ್ಲಿ

ಕಲೆಯನ್ನು ಮುಂದಿಡಬಂದಿಹಳು ನರ್ತಕಿ

ನವರಸಗಳನ್ನು ಆಸ್ವಾದಿಸುತ್ತಾ

ನಮ್ಮ ಮನಸಂತೋಷಕ್ಕೆ ಹಾಡಿ ಕುಣಿವಳೀ ನರ್ತಕಿ



ನಾಟ್ಯರಾಣಿಯಾಗಿ ಸೇವೆಗೈದಿಹಳು ಮೋಸಮಾಡದೇ ನಾಟ್ಯರಾಜನಿಗೆ

ಪಿಸುಮಾತಲಿ ಕೊಂಕಾಡುವರು ಮೂಢರು ಅರಿಯದೇ ಅವಳ ಚಡಪಡಿಕೆ



ಮನದಲ್ಲಿ ನೂರಾರು ದುಗುಡ ದುಮ್ಮಾನ 

ಹೊಟ್ಟೆ ಹೊರೆಯಬೇಕೆಂಬ ಸ್ವಾಭಿಮಾನ

ಇರುಳೇ ತನ್ನ ಜಗತ್ತೆಂದು ಸಾಗಿಸುವಳು ಜೀವನ


ಥಳುಕು ಬಳುಕಿನ ನಾಟ್ಯವ ನೋಡಿ ಬಂದಿಹವು ನೂರಾರು ಹೊಗಳಿಕೆ ತೆಗಳಿಕೆ

ಕಿವಿಗೊಡದೇ ಕಾಯ್ದು ಪಡೆಯುವಳು ಮೂರು ಹೊತ್ತಿನ ಊಟಕೆ ಕಾಣಿಕೆ


✍️ ಪ್ರವೀಣ ಪಾಟೀಲ , ಬ್ಯಾಡಗಿ

ಕತ್ತಲೆಯಿಂದ ಬೆಳಕಿನೆಡೆಗೆ

 *_ಕತ್ತಲೆಯಿಂದ ಬೆಳಕಿನೆಡೆಗೆ_*


*ಸಿಹಿ-ಕಹಿ ಭಾವನೆಗಳಲ್ಲಿ* *ಹೊರಳಾಡಿದ ಮನವೇಕೆ ಇಂದು ಮಂಕಾಗಿದೆ*

*ಹೃನ್ಮನಗಳನ್ನು ಆಕಾಶದೆತ್ತರಕ್ಕೆ ಹಾರಿಸಿದ ಮನವೇಕೆ ಇಂದು ಮಂಕಾಗಿದೆ*



*ಖಾಲಿಯಿದ್ದ ಹೃದಯದಲ್ಲಿ* *ಪ್ರೀತಿಯ ಮಳೆಗರೆದ ಮನವೇಕೆ ಇಂದು ಮಂಕಾಗಿದೆ*

*ಪ್ರೀತಿಯ ಚಿಗುರೊಡೆಸಿ ನನ್ನ ಮೈ ಮರೆಸಿದ ಮನವೇಕೆ ಇಂದು  ಮಂಕಾಗಿದೆ*



*ಯಾವ ಭೂತ-ಪ್ರೇತಗಳು ಆವರಿಸಿದವೋ* 

*ಯಾವ ನಿಜ-ವಾಸ್ತವಗಳು ಎಚ್ಚರಿಸಿದವೋ* 

*ಯಾರ ಹಿತನುಡಿಗಳು ಹೀಗೆ ಮಾಡದವೋ* 

*ಯಾರ ಕಹಿ ಮಾತುಗಳು ಹೀಗೆ ನಿಲ್ಲಿಸಿದವೋ*



*ಪ್ರೀತಿಯ ಸೆಲೆಯಲ್ಲಿ ಸಿಲುಕಿದ*

*ಮನ ಹೊರಗೇಕೆ* *ಬಂದಿರುವುದೋ*

*ಆಜ್ಞೆಯಂತೆ ಶಿರಸಾ ವಹಿಸಿ ಪಾಲಿಸಿದ*

*ಮನ ವಾಸ್ತವವನ್ನು ಅರಿತಿರುವುದೋ*



*ನೆಮ್ಮದಿಯ ಬದುಕು ಸಾಗಿಸಲು* 

*ಮುಂದಾಗಿರುವುದೋ*

*ನಿಷ್ಕಲ್ಮಶ ಸ್ನೇಹಕ್ಕ ಕೈ ಚಾಚಲು* 

*ತಿಂತಿರುವುದೋ ನಾನರಿಯೆ*



*ಓ ಮನವೇ*

*ಸಾಕಿನ್ನು ಈ ಬಂಧನ*

*ಮುನ್ನಡಿಯಿಡು* 

*ನಿನಗಾಗಿ ಕಾದಿಹುದು ನಿತ್ಯ ನಂದನ*



✍️ *ಪ್ರವೀಣ ಪಾಟೀಲ್, ಬ್ಯಾಡಗಿ* ✍️


⚫⚫⚫⚫⚫⚫⚫⚫⚪⚪⚪⚪⚪⚪⚪⚪

ಆಡಂಬರವಿಲ್ಲದ ಬದುಕು

 🌷🌷🙏🙏🌹🌹🌹🌹 *ಆಡಂಬರವಿಲ್ಲದ ಸಾರ್ಥಕ ಬದುಕು*🌹🌹🌹🌹🙏🙏🌷🌷


*ಸದಾ ಸುಧಾರಣೆಯತ್ತ ತುಡಿವ ನಿಮ್ಮ ಮನ*

*ಸಾದಾ ಸೀರೆಯುಡುಗೆಗೆ ನಮ್ಮ ನಮನ*

*ಬದುಕಲು ಪರಭಾಷೆ ಕಲಿತರೂ ಕನ್ನಡವೇ ಜೀವಾಳವೆನ್ನುವುದೇ ನಿಮ್ಮೀ ಮನ*

*ಹೇಗೆ ವರ್ಣಿಸಲಿ ಸುಧಾಮೂರ್ತಿಯಮ್ಮ ನಿಮಗಿದೋ ನಮ್ಮ ನಮನ*



*ಲೌಕಿಕ ಜೀವನದಿ ನಿಮ್ಮ ವೃತ್ತಿ ತಂತ್ರಜ್ಞಾನವಾಗಿದೆ*

*ಜೊತೆಗೆ ಸಂಸ್ಕೃತಿಯನ್ನುಳಿಸುವ  ಹುಮ್ಮಸ್ಸಿದೆ*

*ಕೊರೋನಾ ಸಮಯದಿ ನಿಮ್ಮ ಸೇವೆಯ ಅರಿವು ನಮಗಿದೆ*

*ಆದರೂ ಆಡಂಬರವಿಲ್ಲದೆ ನಿಮ್ಮ ಬದುಕು ಸಾಗುತಿದೆ*



*ಆಡಂಬರದ ಪೋಷಾಕಿನ ಒಲವು ನಿಮಗಿಲ್ಲ*

*ಆಡಂಬರದ ಜೀವನ ನಡೆಸುವವರ ಮೇಲೆ ಮುನಿಸು ನಿಮಗಿಲ್ಲ*

*ನಿಮ್ಮ ಮಾತು ಕೇಳಿದರೆ ತಮ್ಮ ತಾವೇ ಅರಿಯುವವರು ಜನರೆಲ್ಲ*

*ನೂರಾರು ವರುಷ ನಮ್ಮಜೊತೆ ಬಾಳಿರಿ* 

*ನಿಮ್ಮನು ದೂಷಿಸುವ ಜನ ನಮಗೆ ಕಾಣಿಸುತಿಲ್ಲ..*


✍️ *ಪ್ರವೀಣ ಪಾಟೀಲ, ಬ್ಯಾಡಗಿ*✍️

ಭಾಷೆ

 *🤝ಭಾಷೆ🤝*


*ಓ ಗೆಳತಿ*


*ದಿನವೂ ನೆನಪಿಗೆ ಬರುವೆ*

ಸಿಹಿಜೇನು ಹೊತ್ತು  ತರುವೆ

ಇರುವ ಅರೆಕ್ಷಣದಲ್ಲಿ ಮನಸ್ಸಿಗೆ ಚುಚ್ಚಿ ಹೋಗುವೆ💔


*ಮರೆತು ಹೋಯಿತೆ* 

ಜೊತೆ ಓಡಾಡಿದ 

ಕಷ್ಟ-ಸುಖ ಹಂಚಿಕೊಂಡ ನೆನಪು

ದೇವರ ಹೆಸರಲ್ಲಿ ನಿನಗಾಗಿ ನಾ ಕಟ್ಟಿದ ಮುಡಿಪು💝



*ಮನದೊಡೆಯ ಬಂದನೆಂದು*

ನನ್ನ ಮೇಲೆ

ಮನದೊಳಗೆ ಮುನಿಯಬೇಡ 

ನೀ ಮುನಿಸಿಕೊಂಡಾಗ ನಾ ಮುದ್ದು ಮಾಡಿದ ಮರೆಯಬೇಡ💞



*ಈಗಲೂ ಹೇಳುವೆ ನಿನಗೆ ಶುಭಾಶಯ*💓 ಆದರೂ ನೀ ಮರೆತೆಯಲ್ಲ ನನಗೆ ನೀ ನೀಡಿದ ಭಾಷೆಯ..🤝🤝❌❌


✍️ಪ್ರವೀಣ ಪಾಟೀಲ್, ಬ್ಯಾಡಗಿ✍️

ತಾಯಿಯಿಲ್ಲದ ತವರು

 *ತಾಯಿಯಿಲ್ಲದ ತವರು*



ಏಕೆ ಸಿಡಿಮಿಡಿಗೊಳ್ಳುವೆ ಮಡದಿ

ಅವಳಿಂದಲೇ ನೀ ನನ್ನ ಕೈ ಹಿಡಿದಿ

ಅಮ್ಮನಿಗೆ ನೀಡುವಾಗ ಮುಸಿ ಮುಸಿ ಎನ್ನುವೆ 

ಗೊತ್ತಿಲ್ಲದಂತೆ ತಂಗಳು ಸೇರಿಸಿ ಬಡಿಸುವೆ



ಯಾವಾಗ ಹೋದೀತೋ ಎಂದು ಮನದಲ್ಲಿ ಕೊರಗುವೆ

ತಿಳಿದುಕೋ ಅವಳಿಗೆ ಅಷ್ಟು ಬೇಗ ಕರೆ ಬರುವುದಿಲ್ಲ

ಕರೆ ಬಂದರೂ ನಾ ಸದ್ಯಕ್ಕೆ ಅವಳನ್ನು ಬಿಡುವುದಿಲ್ಲ



ನಮ್ಮ ಸಹೋದರಿ ಬಂದಾಗ 

ಮಾಡುತ್ತೀ ನೀ ಬಿಂಕು ಬಿನ್ನಾಣ

ನೀನೂ ತವರಿಗೆ ಹೋದಾಗ ಹೀಗಾದರೆ ಆಗುವುದು ನಿನ್ನ ಮುಖ ಚಿತ್ರಾನ್ನ



ಅರಿತು ನಡೆ ನೀನೂ ಹೆಣ್ಣಾಗಿ 

ನನ್ನ ತಾಯಿಯ ಸೊಸೆಯಾಗಿ

ನಮ್ಮ ಮಗಳ ತಾಯಿಯಾಗಿ

ನಮ್ಮ ಮಗನ ಹೆಂಡತಿಯ ಅತ್ತೆಯಾಗಿ



ಯಾಕೆ ನಿನಗೆ ನಮ್ಮಮ್ಮನ ಮೇಲೆ ಕೋಪ

ತಾಯಿಯಿಲ್ಲದ ತವರಿಗೆ ಹೋಗಬೇಕಾದೀತು ನಿಮ್ಮತ್ತಿಗೆಯೂ ಹೀಗೇ ಹಾಕಿದರೆ ಹಿಡಿ ಶಾಪ..


✍️ ಪ್ರವೀಣ ಪಾಟೀಲ್, ಬ್ಯಾಡಗಿ✍️

ಸ್ನೇಹ

 *ಸ್ನೇಹ* ಅಂತರಂಗದ ಭಾವನೆಗಳು ಒಡಮೂಡಿವೆ ಸಮಾನ ಮನಸ್ಸಿನ ವ್ಯಕ್ತಿಯೆದುರು ನೀಡುವನು ಚೈತನ್ಯವನು ಉಲ್ಲಾಸ ತುಂಬಿರಲೆಂದು ಕೈಹಿಡಿದು ನಡೆಯುವನು ಜೀವನ ಸುಂದರವಾಗಿರಲೆಂದು ಯಾ...